Monday, August 26, 2013

28

"ಇಂದಾಗಲಿಲ್ಲ ನಾಳೆ"
ಎಂದವನ ಮಾತಿಗೆ
ಅತ್ತಲಿಂದ ಬಿಕ್ಕಿದ ಸದ್ದು..
 
"ಅಳದಿರೇ ಚಿನ್ನಾ.."
ಎಂದವನ ಮಾತಿಗೆ
ಮತ್ತತ್ತಲಿಂದ ನಸುನಕ್ಕ ಸದ್ದು..
 
"ಅಳುತಿಲ್ಲ ದೊರೆ ನಾನು
ಬರುವ ಖುಶಿಗಾಗಲೇ ತೊಳೆದಿದ್ದೆ.
ಕೊಳೆಯಾದೀತು ನಾಳೆ ಬರುವವರೆಗೆ
ಬಂದಾಗಲೊಮ್ಮೆ ನೀನು
ಮನದ ಬಿಂಬಕಿಣುಕುವ ಕನ್ನಡಿ ಕಣ್ಣು
ಸ್ವಚ್ಛವಿರಲೆಂದು ಮತ್ತೆ ತೊಳೆಯುತಿರುವೆನು....

No comments:

Post a Comment