Saturday, August 8, 2015

**

ವೈಶಾಖದೊಂದು ಮಳೆಹನಿ
ಹೊಕ್ಕು ನೆಲದೆದೆಯಾಳ
ಸತ್ತಂತಿದ್ದ ಸಂವೇದನೆಯೆಚ್ಚರಿಸಿ
ತಟ್ಟಿತಡವಿ ಮುಚ್ಚಿದಕಣ್ಣ ಮುತ್ತಿಟ್ಟಿತು.
ಧರೆಯೊಡಲಲಿ ಸಣ್ಣ ಸಂಭ್ರಮ
ಜಗಕೆ ಮಣ್ಣ ಮೆಲುಘಮ!!

2 comments:

  1. ಇದು ಕವನದ ಕೆಲಸವೂ ಹೌದು. ಒಂದು ಹನಿಗವನವು ಸಹೃದಯನ ಎದೆ ಸೇರಿ, ಅವನಲ್ಲಿ ಸುಗಂಧವನ್ನು ಹರಡುವುದು. ಆ ಕಾರ್ಯವನ್ನು ನಿಮ್ಮ ‘ವೈಶಾಖದ ಮಳೆಹನಿ’ ಮಾಡಿದೆ!

    ReplyDelete
    Replies
    1. ಹೌದಾದರೆ ನಾನು ಧನ್ಯೆ ಸುನಾಥ್ ಸರ್.
      :-)

      Delete