ಇಂದಿನ ಚಂದಿರನಂತೆಯೇ ಇಂದು ಮನಸು
ಪೂರ್ತಿಯಲ್ಲ, ಅಪೂರ್ತಿಯೂ ಅಲ್ಲ.
ಶುಭ್ರವಿದ್ದೂ ಅಕಳಂಕವಲ್ಲವೆನಿಸಿದಲ್ಲಿಪೂರ್ತಿಯಲ್ಲ, ಅಪೂರ್ತಿಯೂ ಅಲ್ಲ.
ಮುದ್ದುಮೊಲವೆನಿಸುವ, ಅದಲ್ಲದ ಕಲೆ.
ಶ್ವೇತಛತ್ರಿಯೊತ್ತಾಸೆಯ ಅಡಿಯಿದ್ದೂ
ಆಗಾಗ ಮಬ್ಬಾಗಿಸುವ ಕರಿಮೋಡ ಸರಣಿ.
ಮೋಡ ಚಲಿಸಿದ್ದೋ, ಚಂದ್ರ ತಪ್ಪಿಸಿಕೊಂಡದ್ದೋ
ಮತ್ತೆಮತ್ತೆ ಕಾಣೆಯಾಗುತಾ,
ಮತ್ತೆಮತ್ತೆ ಸ್ಪಷ್ಟವಾಗುತಾ
ಇಂದು ಮನಸು ಥೇಟ್ ಇಂದಿನ ಚಂದ್ರನಂತೆ...
ಚಂದಿರನಿಗೂ ಮನಸಿಗೂ direct link ಇದೆ ಜೋತಿಷ್ಯದ ಪ್ರಕಾರ.
ReplyDelete